ಸ್ಥಿಮಿತ

ಆ ಹಾದಿ ಸಾಗಿದೆಡೆ
ನಡೆದು ಬಿಡು ಮಾನವ
ಇರದು ಹುಡುಕಾಟ
ಹಂಬಲಿಕೆ ನಿನಗೆ

ಕುರುಡ ಮೋಹದ
ಕುದುರೆ ಕೈಕೊಟ್ಟ ಕ್ಷಣವೇ
ಉರಿದು ಬಿದ್ದಿದೆ
ನಿನ್ನ ಆಶೆ ಗೋಪುರ ಬಣವೆ

ಬೊಗಳೆ ಮಾತಿಗೆ ಬಲಿ
ಬೀಳುವುದು ತರವಲ್ಲ
ಸ್ಥಿಮಿತ ಮನಸಿನ ಧೈರ್ಯ
ನಿನಗೆ ಹೊಸತಲ್ಲ

ಎತ್ತ ನೋಡಿದರತ್ತ
ಕುಹಕ ಕರಿಮುಖ ಕಂಡು
ನಡೆಸದಿರು ಹಿನ್ನಡೆಗೆ
ಬದುಕು ದುಸ್ತರವೆಂದು

ಕ್ಷಮಿಸು ದಕ್ಕಿದಾ ದಾರಿ
ಬದುಕು ನೈಜತೆ ತೋರಿ
ತ್ಯಜಿಸು ಅಪರಮಾರ್ಗದ ಕರ್ಮ
ಆರಿತು ಧರ್ಮದಾ ಮರ್ಮ

ಬಯಸಿದ್ದು ಬೇಕೆಂಬ
ಹಠಕ್ಕಿಲ್ಲ ನಾಸ್ತಿ
ಸಿಕ್ಕಪಾಲೆ ಸುಖವೆಂದರೆ
ಬದುಕು ಸ್ವರ್ಗದಾ ಆಸ್ತಿ


Previous post ನಾನು ಮತ್ತು ಅವನು
Next post ಹೈದರಾಬಾದಿನಲ್ಲಿ ಜೂನ್

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

cheap jordans|wholesale air max|wholesale jordans|wholesale jewelry|wholesale jerseys